ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನೆ ಮತ್ತು ಜನ ಸಂಪರ್ಕ ಸಭೆ

ಕೊರಟಗೆರೆ: ಅಣ್ಣ ನಮ್ಮ ಬದುಕನ್ನು ನೀವೇ ನೋಡಿಕೊಳ್ಳಿ. ರೈತರ ಬದುಕನ್ನು ಹಾಳು ಮಾಡಬೇಡಿ. ಈ ಯೋಜನೆ ನಮ್ಮ ಬದುಕನ್ನು ಮೂರಬಟ್ಟೆ ಮಾಡಿಬಿಡುತ್ತದೆ. ನಮಗೆ ನೆಲೆಯೇ ಇಲ್ಲದಂತಾಗುತ್ತದೆ. ನಾವೇನು ಮಾಡಬೇಕು ?…
ತಾಲ್ಲೂಕಿನ ಕೋಳಾಲ ಹೋಬಳಿಯ ಚಿನ್ನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಂಕದಹಳ್ಳಿ. ಚಿನ್ನಹಳ್ಳಿ. ಪುರದಹಳ್ಳಿ ಬೂಚನಹಳ್ಳಿ ಚೆನ್ನವಡೇರಹಳ್ಳಿ. ಭೈರಗೊಂಡ್ಲು ಗ್ರಾಮಗಳ ರೈತರ ಜೊತೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎದುರು ಆ ಭಾಗದ ರೈತರು ಮನವಿ ಮಾಡಿ ಹಲವಾರು ರೈತರ ಸಲಹೆಗಳನ್ನು ಕಾರ್ಯಕ್ರಮದಲ್ಲಿ ಪಡೆದರು.

ತುಮಲ್ ನಿರ್ದೇಶಕ ವಿ. ಸಿದ್ದಗಂಗಯ್ಯ ಮಾತನಾಡಿ: ಪೂರ್ವಿಕ ಕಾಲದಿಂದ ನಮ್ಮ ತಂದೆ ತಾಯಿ ತಾತಂದಿರು. ಕೃಷಿಯ ಜೀವನದಾರ ಬದುಕು ಸಾಗಿಸುತ್ತಿದ್ದು. ಈ ಭಾಗದ ನಾಲ್ಕರಿಂದ ಐದು ಹಳ್ಳಿಯವರು ಸತ್ತದಂತೆ ಜೀವನ ಸಾಗುಸುಸ್ತಿದ್ದು. ಮನಸ್ಥಿತಿಯಲ್ಲಿ 9 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಗಿಡ ಮರಗಳನ್ನು ನೆಡದೆ ಅತಂತ್ರ ಪರಿಸ್ಥಿತಿಯಲ್ಲಿ ತಲುಪಿದ್ದು. ಇಂದಿನ ದಿನಗಳಲ್ಲಿ ಮಾಜಿ ಶಾಸಕರಾದ ವೆಂಕಟರಮಣಯ್ಯ ನವರು ಹಾಗೂ ಶಾಸಕ ಹಾಗೂ ಮಾಜಿ ಸಚಿವ ಟಿ.ಬಿ. ಜಯಚಂದ್ರ ನಮ್ಮ ಹಳ್ಳಿಗಳಿಗೆ ಆಗಮನಸಿದ್ದು. ಒಳ್ಳೆ ನಂಜುಂಡೇಶ್ವರ ಸ್ವಾಮಿ ದೇವಸ್ಥಾನ ಹತ್ತಿರ ಕಾರ್ಯಕ್ರಮ ಮಾಡಿ ಡ್ಯಾಮ್ ಮಾಡದಂತೆ ನೀರು ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು. ಇಂದಿನ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ರವರು ಇದ್ದಾಗ ಪ್ರತಿ ಗ್ರಾಮಕ್ಕೆ ಭೇಟಿ ನೀಡಿದ್ದು. ಹಳ್ಳಿಹಳ್ಳಿಗಳಲ್ಲಿ ಆಗುವಂತಹ ನೋವು ಹಾಗೂ ಯೋಜನೆಯಿಂದ ತೊಂದರೆ ಆಗುವಂತಹ ಸಮಸ್ಯೆಗಳನ್ನು ಕಲೆಹಾಕಿ ರೈತರ ಹಾಗೂ ಈ ಭಾಗದ ಜನರ ಜೊತೆಯಲ್ಲಿ ಪ್ರೀತಿ ವಾತ್ಸಲ್ಯ ದಿಂದ ಇದ್ದು. ಈಗಿನ ಅಧಿಕಾರಿಗಳು ಯಾವುದೇ ರೀತಿಯ ಮಾಹಿತಿಯನ್ನು ಅತಂತ್ರ ಸ್ಥಿತಿಯಲ್ಲಿ ಇಟ್ಟಿದ್ದಾರೆ. ಆದರೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಂಡು ಕೆಲಸ ಮಾಡಿದರೆ. ರೈತರ ನೋವು ನಲಿವು ಯಾರು ನೋಡುವುದು. ಈ ಭಾಗದ ಹಳ್ಳಿಗಳ ರೈತರು ಊರುಗಳನ್ನು ಬಿಡುವುದು ಇಷ್ಟಪಡುವುದಿಲ್ಲ. ನೀವುಗಳು ಸಹ ಊರುಗಳನ್ನು ಬಿಡುವಂತಹ ಮನಸ್ಸನ್ನು ಮಾಡದೆ. ಬೇರೆ ರೀತಿಯ ಮಾರ್ಗೋಪಯೋಗಳನ್ನು ಕಂಡುಹಿಡಿದು ಪೈಪ್ ಲೈನ್ ಮುಖಾಂತರ ನೀರು ತೆಗೆದುಕೊಂಡು ಹೋಗಿ. ನೀರು ತೆಗೆದುಕೊಂಡು ಹೋಗಲು ವಿರೋಧವಿಲ್ಲ. ಆದರೆ ಡ್ಯಾಮ್ ಮಾಡಲು ಈ ಭಾಗದ ಹಳ್ಳಿಗಳ ರೈತರ ವಿರೋಧವಿದೆ. ನಮ್ಮ ಹಳ್ಳಿಗಳನ್ನು ಉಳಿಸಿಕೊಡಿ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ವೆಂಕಟೇಶ್ ಮೂರ್ತಿ ಮಾತನಾಡಿ: ನಾನು ಕೂಡ ಈ ಭಾಗದ ಹಳ್ಳಿಯ ರೈತನಾಗಿದ್ದು ಕಾಂಗ್ರೆಸ್ ಗ್ಯಾರಂಟಿಯ ತಾಲ್ಲೋಕಿನ ಅಧ್ಯಕ್ಷನಾಗಿದ್ದೇನೆ. ಹಿಂದೆ ದೇವರಾಯನದುರ್ಗ ಹತ್ತಿರ ಡ್ಯಾಮ್ ನಿರ್ಮಾಣ ಮಾಡುವ ಸರ್ಕಾರ ಚಿಂತನೆ ಮಾಡಿತ್ತು. ದೇವರಾಯನ ದುರ್ಗ ಹತ್ತಿರ ಡ್ಯಾಮ್ ನಿರ್ಮಾಣ ಮಾಡಿದರೆ 1 ಕಿಲೋಮೀಟರ್ ಏರಿ ಹಾಕಿದರೆ ಸಾಕು ಯೋಜನೆಗೆ ಬೇಕಾದಷ್ಟು 4 ಟಿಎಂಸಿ ನೀರು ನಿಲುಗಡೆ ಆಗುತ್ತದೆ. ಸರ್ಕಾರಕ್ಕೆ ಸ್ವಲ್ಪ ಒರೆ ಕಡಿಮೆಯಾಗುತ್ತದೆ ಹಾಗೂ ಯಾವುದೇ ರೀತಿಯಾದ ರೈತರಿಗೆ ತೊಂದರೆ ಆಗುವುದಿಲ್ಲ. ಈಗಲೂ ಕೂಡ ಕೆಲಸವನ್ನು ಮಾಡಬಹುದು ಡಿ.ಕೆ. ಶಿವಕುಮಾರ್ ರವರು ಅದನ್ನು ಗಮನಿಸಿ ಈ ಭಾಗದ ರೈತರಿಗೆ ಅನ್ಯಾಯವಾಗದಂತೆ ಮಾಡಬೇಕೆಂದು ಕೇಳಿಕೊಂಡರು.

ಎತ್ತಿನಹೊಳೆ ಯೋಜನೆ ರೈತರ ಹಿತಾ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಚಿಕ್ಕ ತಿಮ್ಮಯ್ಯ ಮಾತನಾಡಿ: ಎತ್ತಿನಹೊಳೆ ಯೋಜನೆಯ ಹೋರಾಟ ಇದೇನು ನೆನ್ನೆ ಮೊನ್ನೆ ಅದಲ್ಲ ಆರಂಭವಾಗಿ 9 ವರ್ಷಗಳು ಕಳೆದಿವೆ. ಆರಂಭ ದಿನದಿಂದ ಒಂದೇ ರೀತಿಯಲ್ಲಿ ಹೋರಾಟ ನಡೆಯುತ್ತಿದ್ದು. ಹೋರಾಟ ಸಮಿತಿ ಮಾಡಿಕೊಂಡು ಆ ಮುಖೇನ ಹಲವಾರು ಹೋರಾಟದ ಕಾರ್ಯಕ್ರಮಗಳು ಆಗಿದ್ದು. ನಂಜುಂಡೇಶ್ವರ ದೇವಸ್ಥಾನ. ಬೈರಗೊಂಡ್ಲು ತಿಮ್ಮಪ್ಪನ ದೇವಸ್ಥಾನ. ಕೋಳಾಲ. ತುಮಕೂರು ಡಿ.ಸಿ. ಕಚೇರಿ ಹತ್ತಿರ ಪ್ರತಿಭಟನೆ ಕೂಡ ನಡೆದಿದ್ದು. ನಮ್ಮ ಹಳ್ಳಿಗಳಲ್ಲಿ ಯಾವುದೇ ರೀತಿಯ ನಾಲೆ ಇಲ್ಲ ಸಣ್ಣ ಸಣ್ಣ ರೈತರು ತೋಟ. ತರಕಾರಿ. ಇತ್ಯಾದಿ ಬೆಳೆಗಳನ್ನು ಬೆಳೆದುಕೊಂಡು ಕೆಲಸ ಮಾಡಿಕೊಂಡು ಬರುತ್ತಿದ್ದು. ನಮ್ಮ ಹಳ್ಳಿಗಳಲ್ಲಿ 25,000 ಒಂದೊಂದು ಹಳ್ಳಿಗಳಲ್ಲಿ ಅಡಿಕೆ ಮರಗಳು ಇವೆ. ಕೊರಟಗೆರೆ ತಾಲೂಕಿನ ಈ ಭಾಗದ ಕೋಳಾಲ ಹಳ್ಳಿಗಳನ್ನು ಮಲೆನಾಡಿನ ಫಲವತ್ತತೆಗಿಂತ ಈ ಭಾಗದ ಭೂಮಿಯನ್ನು ಇಟ್ಟು ಕೊಂಡು 300 ರಿಂದ 400 ಅಡಿವರೆಗೆ ನೀರು ಈಗಲೂ ಸಹ ಬರುತ್ತದೆ. ಇಂತಹ ಫಲವತ್ತಾದ ಭೂಮಿ ಇದ್ದು. ಹಿಂದಿನ ಡಿ.ಸಿ. ಅವರು ತೀರ್ಮಾನ ಮಾಡಿ. ಸರ್ವೇ ಮಾಡಿಸಿ. ಇಂದಿನ ಕಾಲದ ಮಾಜಿ ಸಿಎಂ ಬಿ‌ಎಸ್. ಯಡಿಯೂರಪ್ಪನವರ ಸರ್ಕಾರ ಹಾಗೂ ನೀರಾವರಿ ಸಚಿವ ಜಿಲ್ಲಾ ಸಚಿವ ಜೆ.ಸಿ. ಮಾಧುಸ್ವಾಮಿ ಹಳ್ಳಿಗಳಿಗೆ ಖುದ್ದಾಗಿ ಬಂದು ಭೇಟಿ ಮಾಡಿ. ಎರಡು ತಾಲೂಕಿನ ತಾರತಮ್ಮ ಇದ್ದು. ದೊಡ್ಡಬಳ್ಳಾಪುರ ಒಂದು ಭೂಮಿಯ ಬೆಲೆ. ಕೊರಟಗೆರೆ ತಾಲ್ಲೂಕುಗೆ ಒಂದು ಭೂಮಿಗೆ ಬೆಲೆ. ಎರಡು ತಾಲೂಕಿನ ಭೂಮಿ ಪಕ್ಕದಲ್ಲೇ ಇದೆ ಎಂದು ತೀರ್ಮಾನ ಮಾಡಿ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸೂಕ್ತ ಜಾಗ ಲಕ್ಕೆನಹಳ್ಳಿ ಹತ್ತಿರ ಜಾಗವನ್ನು ಗುರುತಿಸಿ ಡ್ಯಾಮ್ ನಿರ್ಮಾಣ ಮಾಡಬಹುದು ಯಾವುದೇ ಹಳ್ಳಿಗಳು ಮುಳುಗಡೆ ಆಗುವುದಿಲ್ಲ ಹಾಗೂ ಕಾಟೇನಹಳ್ಳಿ ಕೆರೆ ಮೇಲ್ಬಾಗದಲ್ಲಿ ತೋಟಗಳು ಹಾಗೂ ಹೆಚ್ಚಿನದಾಗಿ ರೈತರ ಉಳುಮೆ ಮಾಡುವ ಭೂಮಿಗಳು ಇರುವುದಿಲ್ಲ. ಎಂದು ಸಲಹೆ ನೀಡಿ. ಅಧಿಕಾರಿಗಳಿಗೆ ಸಲಹೆ ನೀಡಿದ್ದು. ಆದರೆ ಅಧಿಕಾರಿಗಳು ಈಗ ಕೊರಟಗೆರೆ ಭಾಗಕ್ಕೆ ಬಂದು ಡ್ಯಾಮ್ ನಿರ್ಮಾಣ ಮಾಡುತ್ತೇವೆ ಎಂದು ವಾತಾವರಣ ಸೃಷ್ಟಿಯಾಗಿದ್ದು. ಯಾವುದೇ ಕಾರಣಕ್ಕೂ ಯಾವುದೇ ರೀತಿಯ ರೈತರಿಗೆ ತೊಂದರೆ ಆಗದಂತೆ, ನಿಮ್ಮ ಕೆಲಸಗಳನ್ನು ಮಾಡಬೇಕೆಂದು ಹೇಳಿದರು.

ಶಿವರಾಜ್ ಮುಖಂಡ: ನಮ್ಮ ಗ್ರಾಮಕ್ಕೆ ಉಪಮುಖ್ಯಮಂತ್ರಿಗಳು ಬಂದಿದ್ದು ಅವರಿಗೆ ಮತ್ತು ಅವರ ಜೊತೆಯಲ್ಲಿ ಇಡೀ ಸರ್ಕಾರದ ಅಧಿಕಾರಿಗಳು ಬಂದಿದೆ ಅವರಿಗೆ ಸ್ವಾಗತ ಬಯಸುತ್ತೇನೆ. ಆದರೆ ಎತ್ತಿನಹೊಳೆ ಡ್ಯಾಮ್ ಮಾಡುವುದಕ್ಕೆ ಸ್ವಾಗತ ಮಾಡುವುದಿಲ್ಲ. ಹಿಂದಿನ ಕಾಲದ ಪೂರ್ವಜರು ಕಟ್ಟಿಕೊಂಡು ಭೂಮಿಯಲ್ಲಿ ಕೇವಲ ಅರ್ಧ ಅಥವಾ 1 ಎಕರೆ ನಮ್ಮಗಳಿಗೆ ಭೂಮಿ ಇದೆ ಯಾರು ಕೂಡ ಈ ಭಾಗದಲ್ಲಿ 10 ಅಥವಾ 15- 20 ಎಕರೆಗಳಿಲ್ಲ. ಈ ಭಾಗದ ರೈತರು ಹೈನುಗಾರಿಕೆ ಮತ್ತು ರೇಷ್ಮೆ. ಅಡಿಕೆ. ಹೂವು. ಬೆಳೆದು ಜೀವನ ಸಾಗಿಸುತ್ತಿದ್ದು. ಹಾಗಾಗಿ ನೀವೇನು ಡ್ಯಾಮ್ ಮಾಡಲೇಬೇಕು ಎಂದು ತೀರ್ಮಾನ ಮಾಡಿದರೆ. ನಾವುಗಳು ಬಿಡುವುದಿಲ್ಲ. ನಮ್ಮ ಹೆಣಗಳ ಮೇಲೆ ಮತ್ತು ನಮ್ಮ ಜೀವ ಹೋದರು ಸಹ ಡ್ಯಾಮ್ ನಿರ್ಮಾಣ ಮಾಡಲು ಬಿಡುವುದಿಲ್ಲ. ನಮ್ಮಗಳಿಗೆ ಕೊಡುವಂತಹ ಪರಿಹಾರಕ್ಕೆ ಕೈ ಚಾಚುವುದಿಲ್ಲ. ಅಂತಹ ಪರಿಹಾರ ಸಾಕಾಗುವುದಿಲ್ಲ ಎಂದು ಹೇಳಿದರು.
ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವರಾಮಯ್ಯ. ಮುಖಂಡರಾದ ಮಹಾಲಿಂಗಪ್ಪ. ಅರಕೆರೆ ಶಂಕರ್. ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಕೆಂಪರಾಮಯ್ಯ. ಬಿಎಂಸಿ ಚಂದ್ರು. ಪುರುಷೋತ್ತಮ್. ಇ.ಇ.ಓ. ಅಪೂರ್ವ ತಾಲೂಕು ದಂಡಾಧಿಕಾರಿ ಮಂಜುನಾಥ್. ಆರ್.ಐ. ಕೃಷ್ಣಮೂರ್ತಿ.ಕೋಳಾಲ ಪಿ.ಡಿ.ಓ.ಮಧುಸೂದನ್. ಚಿನ್ನಹಳ್ಳಿ ಗಾ.ಪಂ.ಪಿ. ಶ್ರೀಧರ್ ರೈತರು ಹಾಗೂ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗ ಹಾಜರಿದ್ದರು.

ವರದಿ– ಭರತ್ ಕೆ