ಕನ್ನಡ ಪಕ್ಷ, ರೈತ ಸಂಘ ನೀರಾವರಿ ಹೋರಾಟ ಸಮಿತಿ ಸದಸ್ಯರಿಂದ ಜಿಲ್ಲಾ ಉಸ್ತುವಾರಿ ಸಚಿವರ ಬೇಟಿ

ದೊಡ್ಡಬಳ್ಳಾಪುರ: ಕನ್ನಡ ಪಕ್ಷ ಹಾಗೂ ರೈತ ಸಂಘ ಹಾಗೂ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಎಲ್ಲಾ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಕೆ ಹೆಚ್ ಮುನಿಯಪ್ಪನವರನ್ನು ಭೇಟಿಯಾಗಿ ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ ದೇವನಹಳ್ಳಿ ಈ ಭಾಗದ ರೈತರಿಗೆ ಕಾರ್ಮಿಕರಿಗೆ ಹಾಗೂ ನೇಕಾರರಿಗೆ ಆಗುತ್ತಿರುವ ಅನಾನುಕೂಲತೆಗಳನ್ನು ಹಾಗೂ ತೊಂದರೆಗಳನ್ನು ತಿಳಿಸಲಾಯಿತು. ರೈತರಿಗೆ ಎತ್ತಿನ ಹೊಳೆ ಯೋಜನೆ, ಕೆ ಸಿ ವ್ಯಾಲಿ, ಹೆಚ್ ಎನ್ ವ್ಯಾಲಿ, ವೃಷಭಾವತಿ ನೀರನ್ನು ಮೂರನೇ ಬಾರಿ ಶುದ್ಧೀಕರಿಸಲು ಹಾಗೂ ಅರ್ಕಾವತಿ ,ಕೃಷ್ಣ ಮೇಲ್ದಂಡೆ ಯೋಜನೆ, ತಿಪ್ಪೂರು ಪಂಚಾಯಿತಿಯ ಗೊರವೆ ಹಳ್ಳ ಹಾಗೂ ದೇವನಹಳ್ಳಿ ಚನ್ನರಾಯಪಟ್ಟಣದ ರೈತರ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಮತ್ತು ಭಾಷೆಟ್ಟಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಲುಷಿತವಾಗಿರುವ ನೀರನ್ನು ಬಿಡುತ್ತಿರುವ ಕೈಗಾರಿಕೆಗಳಿಗೆ ಎಚ್ಚರಿಕೆಯನ್ನು ಕೊಟ್ಟು ಕಂಪನಿಗಳಲ್ಲೇ ನೀರನ್ನು ಶುದ್ಧ ಕರಿಸಲು, ಸುತ್ತಮುತ್ತಲಿನ ಊರಿನ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ದೊರೆಯುವಂತೆ ಮತ್ತು ಈಗಾಗಲೇ ಸ್ಥಾಪನೆಯಾಗಿರುವ ಇಎಸ್ಐ ಆಸ್ಪತ್ರೆಯನ್ನು ಈ ಕೂಡಲೇ ಪ್ರಾರಂಭಿಸಬೇಕೆಂದು ಆಗ್ರಹಿಸಲಾಯಿತು ಇನ್ನೂ ಹತ್ತು ಹಲವಾರು ವಿಚಾರಗಳನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮನವರಿಕೆ ಮಾಡಿ ಕೊಡಲಾಯಿತು. ಈ ವಿಚಾರವನ್ನು ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿ ಗಳು ಹಾಗೂ ಮಾನ್ಯ ಉಪಮುಖ್ಯ ಮಂತ್ರಿಗಳ ಗಮನಕ್ಕೆ ತಂದು ಈ ಭಾಗದ ರೈತರು ಕಾರ್ಮಿಕರು ನೇಕಾರರ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತೇನೆಂದು ಮಾನ್ಯ ಉಸ್ತುವಾರಿ ಸಚಿವರು ಆಶ್ವಾಸನೆ ನೀಡಿದರು ಈ ಸಂದರ್ಭದಲ್ಲಿ ಕನ್ನಡ ಪಕ್ಷದ ಸಂಜೀವ ನಾಯಕ್ ಹಿರಿಯ ರಾಜ್ಯ ಉಪಾಧ್ಯಕ್ಷರು, ರೈತ ಸಂಘದ ಹನುಮೇಗೌಡರು, ಮುತ್ತೇಗೌಡರು, ಕನ್ನಡ ಪಕ್ಷದ ಜಿಲ್ಲಾ ಅಧ್ಯಕ್ಷ ಎಚ್ ಮುನಿ ಪಾಪಯ್ಯ ,ತಾಲೂಕು ಅಧ್ಯಕ್ಷರಾದ ಡಿ ವೆಂಕಟೇಶ್, ತೂಬಗೆರೆ ಶರಿಫ಼್, ಸಂಘಟನಾ ಕಾರ್ಯದರ್ಶಿ ಪರಮೇಶ್‍, ಶಿವರಾಜ್ ಕುಮಾರ್ ಸೇನಾ ಸಮಿತಿಯ ಅಧ್ಯಕ್ಷ ರಮೇಶ್ ಗುರುರಾಜ್ ರವರು , ಹೊನ್ನಾಘಟ್ಟ ಮೂರ್ತಿ, ಮುರಳಿ, ಕೃಷ್ಣಮೂರ್ತಿ ಯವರು ಬಾಗವಹಿಸಿದ್ದರು.