.ನಾಲ್ವರ ಮೇಲೆ ಚಿರತೆ ದಾಳಿ. ತತ್ತರಿಸಿದ ದಬ್ಬೇಘಟ್ಟ ಹೋಬಳಿಯ ಗ್ರಾಮಸ್ಥರು.

ತುರುವೇಕೆರೆ. ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಗೋಣಿ ತುಮಕೂರು ನಡುವನಹಳ್ಳಿ ದೇವಿಹಳ್ಳಿ ಹಾಗೂ ಕೆಲ ಗ್ರಾಮಗಳ ತೋಟಗಳಲ್ಲಿ ದನ ಕರ ಕುರಿಗಳನ್ನು ಮೇಯಿಸುತ್ತಿದ್ದವರ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ

ಹೌದು ಪ್ರಿಯ ಓದುಗರೆ..
ನಡುವನಹಳ್ಳಿ ಗ್ರಾಮದ ಅವರ ತೋಟದ ಮನೆಯಲ್ಲಿ ವನಜಾಕ್ಷಿ ದನಗಳನ್ನು ಮೇಯಿಸುತ್ತಿದ್ದ ಮಧ್ಯಾನದ 3:00 ಘಂಟೆ ಸಮಯದಲ್ಲಿ ಏಕಾಏಕಿ ಚಿರತೆ ಧಾಳಿ ನಡೆಸಿದೆ. ಗಾಬರಿಯಿಂದ ಅಲ್ಲಿಂದ ಕಾಲ್ ಕಿತ್ತ ಚಿರತೆ ಗೋಣಿ ತುಮಕೂರು ತೋಟದಲ್ಲಿದ್ದ ಹುಚ್ಚಮ್ಮನ ಮೇಲೆ ದಾಳಿ ಮಾಡಿ ಮತ್ತೆ ಅಲ್ಲಿಂದ ಹೊರಟ ಚಿರತೆ ಬೋರೇಗೌಡರ ಮೇಲೆ ಕಿರುಬನಕಲ್ಲು ಬಳಿ ಎಮ್ಮೆ ಬೇಯಿಸುತ್ತಿದ್ದ ಬೋರೇಗೌಡರ ಮೇಲೆ ದಾಳಿ ನಡೆಸಿ ಮತ್ತೆ ಅಲ್ಲಿಂದ ಹೊರಟ ಚಿರತೆ ನೀರಗಂಟಿ ಸಣ್ಣ ಲಿಂಗಯ್ಯ ಮೇಲೆ ದಾಳಿ ಮಾಡಿ ದೇವಿಹಳ್ಳಿ ಶೇಖರ್ ಎಂಬುವರ ಮೇಲೆ ದಾಳಿ ಮಾಡಲು ಹೋಗಿ ಅವರ ಮನೆಯಲ್ಲಿ ಬಂಧಿಯಾಗಿದೆ ಎಂದು ತಿಳಿದುಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ತುರುವೇಕೆರೆ ತಾಸಿಲ್ದಾರ್ ಎನ್ ಎ ಅಹಮ್ಮದ್ ಅವರು ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಸ್ಥಳಕ್ಕೆ ಆಗಮಿಸಿ ಚಿರತೆ ಸೆರೆ ಹಿಡಿಯುವ ಕಾರ್ಯಚರಣೆ ಯಶಸ್ವಿಗೊಳಿಸಿದರು

ಇನ್ನೂ ಚಿರತೆ ಸೆರೆ ಹಿಡಿಯುವುದನ್ನು ನೋಡಲು ಜನಸಾಗರವೇ ಹರಿದು ಬಂತು.

ಚಿರತೆ ದಾಳಿಗೆ ಒಳಗಾದವರರು ಪ್ರಾಣಾಪಯದಿಂದ ಪಾರಾಗಿದ್ದು ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆ ದಾಖಲಿಸಲಾಗಿದೆ.

ವರದಿ; ಮಂಜು ಗುರುಗದಹಳ್ಳಿ