ಸ್ವತಂತ್ರೋತ್ಸವ ದಿನದಂದು ಪಿರಿಮಿಡ್ ಧ್ಯಾನಮಂದಿರ ಉದ್ಘಾಟನೆ
ದೊಡ್ಡಬಳ್ಳಾಪುರ:ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆಗಸ್ಟ್ 15 ರಂದು ಬ್ರಹ್ಮಶ್ರೀ ಪತ್ರೀಜಿ ರವರ ಮಾರ್ಗದರ್ಶನದೊಂದಿಗೆ ದೊಡ್ಡಬಳ್ಳಾಪುರ ನಾದ ಧ್ಯಾನ ಯಜ್ಞ 3ರ ಅಡಿಯಲ್ಲಿ ಶ್ರೀ ನಾರಾಯಣ ಪಿರಮಿಡ್ ಧ್ಯಾನ ಮಂದಿರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಮುಖ್ಯ ತರಬೇತುದಾರ ಅಯ್ಯಪ್ಪ ಪಿಂಡಿ ತಿಳಿಸಿದರು.
ನಗರದ ಹೊರವಲಯದ ಕುರುಬಹಳ್ಳಿ ಪಿಂಡಿಯ ದ್ಯಾನ ಕೇಂದ್ರದಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಸ್ತುತ ಸಮಾಜದಲ್ಲಿ ಸಾಮಾನ್ಯ ಜನತೆ ಹಲವಾರು ತೊಂದರೆಗಳಿಂದ ಬಳಲುತ್ತಿದ್ದು ಸರ್ವ ಸಮಸ್ಯೆಗೂ ರಾಮಬಾಣದಂತೆ ಕೆಲಸ ಮಾಡುವ ಪಿರಮಿಡ್ ಧ್ಯಾನವನ್ನು ಉಚಿತವಾಗಿ ಶ್ರೀ ನಾರಾಯಣ ಪಿರಮಿಡ್ ಧ್ಯಾನ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದು ಆಗಸ್ಟ್ 15ರಂದು ಧ್ಯಾನ ಮಂದಿರದ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ ಕಾರ್ಯಕ್ರಮದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು ಸಕಲ ಸಿದ್ಧತೆ ನಡೆದಿದೆ . ನಾದ ಧ್ಯಾನ ಯಜ್ಞ 3ರ ಅಡಿಯಲ್ಲಿ ಆಸಕ್ತ ಸಾರ್ವಜನಿಕರಿಗೆ ಉಚಿತವಾಗಿ ಪಿರಮಿಡ್ ಧ್ಯಾನವನ್ನು ಮುಖ್ಯ ತರಬೇತುದಾರರಾದ ಅಯ್ಯಪ್ಪ ಪಿಂಡಿ ರವರ ನೇತೃತ್ವದಲ್ಲಿ ಆ ಯೋಜನೆ ಮಾಡಿದ್ದು ತಾಲೂಕಿನ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಮುಖ್ಯ ತರಬೇತುದಾರ ಅಯ್ಯಪ್ಪ ಪಿಂಡಿ ಮಾತನಾಡಿ ಅತ್ಯಂತ ಪ್ರಭಾವಿಶಾಲಿಯಾದ ಪಿರಮಿಡ್ ಧ್ಯಾನ ಸರ್ವರಿಗೂ ಲಭಿಸಲಿ ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ . ಇದು ಮೂರನೇ ಧ್ಯಾನ ಮಂದಿರವಾಗಿದ್ದು ನಾದ ಧ್ಯಾನ ಯಜ್ಞ ವಿಶೇಷವಾಗಿರುತ್ತದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಧ್ಯಾನದ ಉಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದರು
ನಿತ್ಯ ಧ್ಯಾನ ಮಾಡುವ ಮೂಲಕ ಆರೋಗ್ಯ ಸಮಸ್ಯೆ ಹಾಗೂ ಮಾನಸಿಕ ತೊಂದರೆಗಳಿಂದ ದೂರವಿರಬಹುದಾಗಿದೆ. ಕಲುಷಿತ ವಾತಾವರಣದಲ್ಲಿ ನಮ್ಮ ಮನಸ್ಸು ಮತ್ತು ದೇಹದ ಮೇಲೆ ಆಗುವ ದುಷ್ಪರಿಣಾಮಗಳಿಂದ ದೂರವಿರಲು ಧ್ಯಾನ ಅತ್ಯುತ್ತಮ ಮಾರ್ಗ ಸರ್ವರೂ ಈ ಮಾರ್ಗವನ್ನು ಅನುಸರಿಸುವಂತೆ ಮನವಿ ಮಾಡಿದರು.
ಧ್ಯಾನ ಮಂದಿರದ ಸಿಬ್ಬಂದಿ ಉಮೇಶಯ್ಯ ಮಾತನಾಡಿ ಧ್ಯಾನಕ್ಕೆ ಬರುವ ಪ್ರತಿ ಸಾರ್ವಜನಿಕರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದ್ದು ಉಪಹಾರದ ವ್ಯವಸ್ಥೆ ಕೂಡ ಮಾಡಲಾಗಿದೆ . ತುಮಕೂರು ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಪಿರಮಿಡ್ ಧ್ಯಾನದ ಲಾಭಗಳನ್ನು ಸಾರ್ವಜನಿಕರು ಪಡೆದಿದ್ದು. ತಾಲೂಕಿನ ಜನತೆಯ ಉಪಯೋಗಕ್ಕಾಗಿ ಈ ಕಾರ್ಯಕ್ರಮದ ಯೋಜನೆ ಮಾಡಲಾಗುತ್ತಿದೆ ನಿರಂತರ ಧ್ಯಾನ ನಮ್ಮ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಂಗರಾಜು, ಎಲ್. ಕೆ.ನಂದಕುಮಾರ್,ಆರ್ ಶ್ರೀನಿವಾಸ್, ಲಿಂಗರಾಜು,ಅರುಣ್ ಕುಮಾರ್, ಹೆಚ್. ಬಿ.ದೊಡ್ಡ ರಂಗಪ್ಪ, ಎ ಚಿತ್ರ ಶ್ರೀ, ಏನ್. ಸವಿತಾ ಸೇರಿದಂತೆ ಹಲವರು ಉಪಸಿತರಿದ್ದರು.