ಹಿರಿಯ ರಂಗಕರ್ಮಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಜವಾಜಿ ಸೀತಾರಾಮ್ ನಿಧನ

Oplus_0

ದೊಡ್ಡಬಳ್ಳಾಪುರ: ಹಿರಿಯ ರಂಗಭೂಮಿ ನಟ ನಿರ್ದೇಶಕರಾಗಿ ಹಲವಾರು ಕಲಾವಿದರ ಪಾಲಿಗೆ ಗುರುವಾಗಿದ್ದ ಇವರು
ಕಾಂಗ್ರೆಸ್‌ ಪಕ್ಷದ ಕಟ್ಟಾಳು ಸಹ ಆಗಿದ್ದ ಹಿರಿಯ ಮುಖಂಡ ಜವಾಜಿ ಸೀತಾರಾಮ್‌ ಅವರು ಶುಕ್ರವಾರ ಆರೋಗ್ಯ ಸಮಸ್ಯೆಯಿಂದ ನಿಧನ ಹೊಂದಿದ್ದಾರೆ.
ಅವರಿಗೆ 84 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಮೂರು ಜನ ಪುತ್ರರು ಹಾಗೂ ಅಪಾರ ಕಲಾವಿದರ ಬಳಗವನ್ನ ಆಗಲಿದ್ದಾರೆ.
ಮಾಜಿ ಶಾಸಕ ಅಪಕಾರನಹಳ್ಳಿ ವೆಂಕಟರಮಣಯ್ಯ, ಡಿ. ಪಿ. ಎ. ಚುಂಚೆಗೌಡ, ಕುರುವಿಗೆರೆ ನರಸಿಂಹಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ಅಪ್ಪಿ ವೆಂಕಟೇಶ್, ಕೆ. ಪಿ. ಜಗನ್ನಾಥ್, ಸಮಾಜವಾದಿ ಪಕ್ಷದ ನಾರಾಯಣ್ ಕೆ. ಎಂ. ಕೃಷ್ಣ ಮೂರ್ತಿ ಸೇರಿದಂತೆ ಹಲವಾರು ಗಣ್ಯರು ಜವಾಜಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.