” ಸುಪ್ರಸಿದ್ಧ ಅಭಯ ಶನೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಆಷಾಢ ಮಾಸದ ವಿಶೇಷ ಪೂಜೆ “
ತಾವರೆಕೆರೆ: ಹೊಸಕೋಟೆ ತಾಲ್ಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದಲ್ಲಿರುವ ಶ್ರೀ ಸುಪ್ರಸಿದ್ಧ ಅಭಯ ಶನೇಶ್ವರ ಸ್ವಾಮಿ ಕ್ಷೇತ್ರದ ಶ್ರೀ ಶನಿ ಮಹಾತ್ಮ ದೇವಾಲಯದಲ್ಲಿ ಆಷಾಢ ಮಾಸದ ಶನಿವಾರ ದಿನದ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗಿತ್ತು.
ಶ್ರೀ ಕ್ಷೇತ್ರದ ಧರ್ಮಕರ್ತರು ಹಾಗೂ ಸಂಸ್ಥಾಪಕರು ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ ಪರಮಪೂಜ್ಯ ವೇದಬ್ರಹ್ಮ ಶ್ರೀ ಶ್ರೀ ಡಾ. ಡಿ.ಎಲ್ ವೀರಬ್ರಹ್ಮಚಾರ್ ಗುರೂಜಿ ರವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು ನಂತರ ಮಾತನಾಡಿದ ಅವರು ಪ್ರತಿ ಶನಿವಾರ ಶ್ರೀ ಶನೇಶ್ವರ ಸ್ವಾಮಿಗೆ ವಿಶೇಷ ಪೂಜೆ ಹಾಗೂ ವಿಶೇಷ ಅಲಂಕಾರ ನೆರವೇರಿಸಲಾಗುವುದು ಈ ಪೂಜಾ ಕಾರ್ಯಕ್ರಮಕ್ಕೆ ತಾಲೂಕಿನ ಮೂಲೆ ಮೂಲೆಯಿಂದ ಜನರು ಬಂದು ದೇವರ ಮುಂದೆ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಇಟ್ಟು ದೇವರಲ್ಲಿ ಪ್ರಾರ್ಥಿಸುತ್ತಾರೆ ಹಾಗೂ ಪ್ರತಿ ಅಮಾವಾಸ್ಯೆ ಹುಣ್ಣಿಮೆ ದಿನದಂದು ದೇವಾಲಯದಲ್ಲಿ ಮೃತ್ಯುಂಜಯ ಹೋಮ ಹಾಗೂ ಮಂಗಳವಾರ ಭಾನುವಾರ ಶುಕ್ರವಾರ ರಾಜ್ಯದ ಮೂಲೆ ಮೂಲೆಯಿಂದ ನೂರಾರು ಸಂಖ್ಯೆಯಲ್ಲಿ ಜನರು ದೇವಾಲಯಕ್ಕೆ ಆಗಮಿಸಿ, ದೇವರ ಮುಂದೆ ಹರಕೆಗಳನ್ನು ಇಡುವ ಪ್ರತಿತಿಯೂ ಸಹ ತುಂಬಾ ವರ್ಷಗಳಿಂದ ನಡೆದುಕೊಂಡು ಬಂದಿದೆ ಪೂಜಾ ಕಾರ್ಯಕ್ರಮಕ್ಕೆ ಬಂದಿದ್ದ ಭಕ್ತಾದಿಗಳು ತೀರ್ಥ ಪ್ರಸಾದ ಅನ್ನದಾಸೋಹ ವ್ಯವಸ್ಥೆ ಮಾಡಿಸಲಾಯಿತು ಎಂದು ತಿಳಿಸಿದರು.
ದೇವಾಲಯದ ಭಕ್ತರಾದ ಗೋಪಿನಾಥ್ ಮಾತನಾಡಿ ದೇವಾಲಯವು ಹೊಸಕೋಟೆ ಕ್ಷೇತ್ರದಲ್ಲಿಯೇ ತಮ್ಮದೇ ಆದ ಒಂದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದ್ದು ಪ್ರತಿ ಅಮಾವಾಸ್ಯೆ ಹುಣ್ಣಿಮೆ ಗುರುಪೂರ್ಣಮಿ ಎಂದು ವಿಶೇಷ ಪೂಜೆಗಳು ಹಾಗೂ ಹೋಮ ಹವನ ನಡೆಯುತ್ತವೆ ಗುರುಪೂರ್ಣಿಮೆ ದಿನದಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜೆ ಕಾರ್ಯಕ್ರಮದಲ್ಲಿ ಸಹ ಭಾಗವಹಿಸುತ್ತಾರೆ ನಂಬಿ ಬಂದ ಭಕ್ತರಿಗೆ ಕಷ್ಟಗಳನ್ನು ಪರಿಹಾರ ಮಾಡುವ ದೇವಾಲಯ ಈ ಕ್ಷೇತ್ರವಾಗಿದೆ ತಮ್ಮ ಜೀವನವನ್ನು ಜನರಿಗಾಗಿ ಮುಡುಪಾಗಿಟ್ಟಿರುವ ವೀರ ಬ್ರಹ್ಮಚಾರಿ ಗುರೂಜಿಗಳಿಗೆ ದೇವರು ಇನ್ನೂ ಹೆಚ್ಚಿನ ಆಯಸ್ಸು ಕೊಟ್ಟು ಜನರ ಸೇವೆ ಮಾಡಲು ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದ ಹಾಗೂ ಪೂಜೆಯ ನೇತೃತ್ವವನ್ನು ರವಿಸುತ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ನೆರವೇರಿಸಿಕೊಟ್ಟರು ಪೂಜಾ ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಹಾಜರಿದ್ದರು.