ಕಲ್ಪತರು ನಾಡು ತಿಪಟೂರಿಗೂ ತಟ್ಟಿದ ಬಂದ್ ಬಿಸಿ.ವಿದ್ಯಾರ್ಥಿಗಳ ಪ್ರಯಾಣಿಕರ ಪರದಾಟ

ತಿಪಟೂರು:ಕೆಎಸ್​ಆರ್​ಟಿಸಿ ಬಸ್​ ಮುಷ್ಕರದ ಹಿನ್ನೆಲೆ ಬಹುತೇಕ ಜಿಲ್ಲೆ ನಗರ ಗ್ರಾಮಾಂತರಗಳಲ್ಲಿ ಬಸ್​ ಸಂಚಾರ ಬಂದ್
ಅದೇ ರೀತಿ ಕಲ್ಪತರು ನಾಡು ತಿಪಟೂರಿಗೂ ಬಂದ್ ಬಿಸಿ ತಟ್ಟಿದೆ . ಹಬ್ಬದ ದಿನಗಳಲ್ಲೇ ಜನರಿಗೆ ಇದು ಬಿಗ್ ಶಾಕ್ ಆಗಿದೆ.
ವೇತನ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್​ಆರ್​ಟಿಸಿ ಬಿಎಂಟಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ
ಸರ್ಕಾರಕ್ಕೆ ಜೊತೆ ಸಭೆ ಮೇಲೆ ಸಭೆ ನಡೆದ್ರೂ ಬೇಡಿಕೆ ಈಡೇರಿಸಿಲ್ಲ ಹೀಗಾಗಿ ಇಂದು ಆಗಸ್ಟ್ 5ರಿಂದ ಬಸ್‌ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ
ಸಾರಿಗೆ ಬಸ್ ಬಂದ್​ ಹಿನ್ನೆಲೆ ರಾಜ್ಯದ ಹಲವೆಡೆ ಬಸ್​ಗಳಿಲ್ಲದೆ ಜನ ಪರದಾಡುವಂತೆ ಆಗಿದೆ.
ಬಸ್ ಬಂದ್​ ಬಿಸಿ ಪ್ರಯಾಣಿಕರಿಗೆ ತಟ್ಟಿದೆ. ಬಸ್​ಗಳಿಲ್ಲದೇ ಜನರು ಖಾಸಗಿ ಬಸ್ ಆಟೋಗಳ ಮೊರೆ ಹೋಗ್ತಿದ್ದಾರೆ. ಮುಕ್ಕಾಲು ಗಂಟೆ ಕಾದ್ರು ಬಸ್ ಸಿಗ್ತಿಲ್ಲ ಅಂತ ಗೊಣಗುತ್ತಿರುವ ಜನ ಆಟೋದಲ್ಲಿ ಪ್ರಯಾಣ ಮಾಡ್ತಿದ್ದಾರೆ.
ನಗರಗಳಿಗೆ ಮಾತ್ರ ಖಾಸಗಿ ಬಸ್​ ಇದ್ದು, ಹಲವು ಜಿಲ್ಲೆಗಳ ಹಳ್ಳಿ ಜನರ ಕಥೆ ಹದೋಗತಿಯಾಗಿದೆ.
ಇಂದು ಸಾರಿಗೆ ಬಸ್​ ಬಂದ್​; ರಸ್ತೆಗೆ ಇಳಿಯೋ ಮುನ್ನ ಎಚ್ಚರ; ಬಸ್​ಗಳಿಲ್ಲದೇ ಬಿಕೋ ಅಂತಿದೆ ನಿಲ್ದಾಣ
ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನ ಈಡೇರಿಸುತ್ತಾರ ಎಂದು ಕಾದು ನೋಡಬೇಕಾಗಿದೆ

ವರದಿ:ಮಂಜು ಗುರುಗದಹಳ್ಳಿ